ರಾಜ್ಯ ಸರ್ಕಾರ ನುಡಿದಂತೆ ಬಡವರಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿದೆ: ಡಾ.ಎಚ್.ಸಿ.ಮಹದೇವಪ್ಪ

1 year ago

ಹಸಿವು ಮುಕ್ತ ಕರ್ನಾಟಕದ ಉದ್ದೇಶಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಈ ಹಿಂದೆ ನುಡಿದಂತೆ ಬಡವರಿಗೆ 10 ಕೆ ಜಿ ಅಕ್ಕಿಯನ್ನು ನೀಡಲು ನಿರ್ಧರಿಸಿದೆ.

ಈ ನಡುವೆ ಕೇಂದ್ರ ಸರ್ಕಾರವು ಅಕ್ಕಿ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರ ಅದನ್ನು ಸ್ವೀಕರಿಸುತ್ತಿಲ್ಲ ಎಂಬ ಬಾಲಿಷವಾದ ಆರೋಪ ಮಾಡಿರುವ ಬಿಜೆಪಿಯ ಪ್ರಹ್ಲಾದ್ ಜೋಷಿ ಅವರು ಈ ಹಿಂದೆ ಕೇಂದ್ರದ ಬಳಿ ಹಣಕೊಟ್ಟು ಅಕ್ಕಿ ಖರೀದಿಸಲು ವಿನಂತಿ ಮಾಡಿದಾಗ ಯಾವ ಕಾರಣಕ್ಕೆ ಹಿಂದೇಟು ಹಾಕಿದರು ಎಂಬುದನ್ನು ತಿಳಿಸಲಿ.

ಆದರೆ ದ್ವೇಷ ರಾಜಕಾರಣಕ್ಕೂ ಮೀರಿದ್ದು ಬಡವರ ಹಸಿವು. ಹೀಗಾಗಿ ನಮ್ಮ ಸರ್ಕಾರವು ಶರಣರ ನುಡಿಗೆ ಬದ್ಧವಾಗಿದ್ದು ಅದರಂತೆಯೇ ನಡೆಯಲು ಅನ್ನಭಾಗ್ಯ ಯೋಜನೆಯಡಿ 10 ಕೆ ಜಿ ಅಕ್ಕಿಯನ್ನು ಪೂರ್ಣವಾಗಿ ನೀಡುವ ನಿರ್ಧಾರವನ್ನು ಕೈಗೊಂಡಿದೆ.

– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ

Leave a Reply