ಹಾಸನ: ಕೊಟ್ಟ ಸಾಲವನ್ನು ವಾಪಸ್ ಕೇಳಿದ ಕಾರಣಕ್ಕೆ ಹಾಸನದಲ್ಲಿ ವೃದ್ಧರೊಬ್ಬರನ್ನು ಹತ್ಯೆಗೈದ ಘಟನೆ ನಡೆದಿದೆ. ಅ. 12ರಂದು ಕೊಟ್ಟ ಹಣ ಹಿಂದಿರುಗಿಸು ಎಂದು ದಾಸೇಗೌಡ ಎಂಬುವವರು ಕಿರಣ್ ಗೌಡನನ್ನು ಕೇಳಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಕಿರಣ್ ಗೌಡ, ದಾಸೇಗೌಡನನ್ನು ಹತ್ಯೆಗೈದು ಪರಾರಿಯಾಗಿದ್ದ. ಇದೀಗ ಹಾಸನ ಗ್ರಾಮಾಂತರ ಪೊಲೀಸರು ಕಿರಣ್ ಗೌಡನನ್ನು ಬಂಧಿಸಿದ್ದಾರೆ.



