ಗದಗ: ಜಿಲ್ಲೆಯ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ಸಮಸ್ತ ಬಂಜಾರ ಸಮುದಾಯದವರು ದಿನಾಂಕ 11/02/2024 ರಂದು ರವಿವಾರದಂದು ಬೆಳಿಗ್ಗೆ11- 30 ಘಂಟೆಗೆ ಲಕ್ಷ್ಮೇಶ್ವರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಶ್ರೀ ಸಂತ ಸೇವಾಲಾಲ 285ನೇ ಜಯಂತಿ ಆಚರಿಸು ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಶ್ರೀ ಸೇವಾಲಾಲ ಕಲ್ಯಾಣ ಸಂಘ ಬೆಂಗಳೂರು ಶಾಖೆ ಶಿರಹಟ್ಟಿ ಅಧ್ಯಕ್ಷ ಈರಣ್ಣ ಡಿ ಚವ್ಹಾಣ ಹೇಳಿದ್ದಾರೆ.

ಸಮಸ್ತ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನ ತಾಂಡದ ನಾಯಕ, ಡಾವು, ಕಾರಬಾರಿ, ಹಾಗೂ ಗುರು ಹಿರಿಯರು ಮತ್ತುಎಲ್ಲಾ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಅರೆ ಸರ್ಕಾರಿ ನೌಕರರು ಹಾಗೂ ಯುವಕ ಮಿತ್ರರು ಈ ಸಭೆಗೆ ಭಾಗವಹಿಸಬೇಕೆಂದು ವಿನಂತಿ ಮಾಡಿದ್ದಾರೆ.
ಸಂಪರ್ಕ: ಈರಣ್ಣ ಡಿ ಚವ್ಹಾಣ, 9845892209




