ಬಡವರ ಸೇವೆ ಮಾಡುವುದೇ ಕಾಂಗ್ರೆಸ್ ಸೇವಾದಳದ ಉದ್ದೇಶ: ಎಂ.ರಾಮಚಂದ್ರ

4 years ago

ಬೆಂಗಳೂರು: ಸೇವಾಮನೋಭಾವನೆಯಿಂದ ಕಾಂಗ್ರೆಸ್ ಪಕ್ಷದ ತತ್ವಸಿದ್ಧಾಂತಗಳಿಗೆ ಬದ್ಧರಾಗಿ ಯಾವುದೇ ಬೇರೆ ರಾಜಕೀಯ ಆಸೆ ಆಮಿಶಗಳಿಗೆ ಒಳಗಾಗದೆ ಸಾಮಾಜಿಕ ಪಿಡಗುಗಳಿಂದ ದೂರವಿರಬೇಕು ಹಾಗೂ ಪ್ರಾಮಾಣಿಕತೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಸೇವಾದಳದ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದು ಕರ್ನಾಟಕ ಸೇವಾದಳದ ರಾಜ್ಯಾಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ರಾಜ್ಯ ಸೇವಾದಳದ ಕಾರ್ಯದರ್ಶಿಯಾಗಿ ಗಂಗೊಲಿ ಹೆಚ್ .ಕುರುಬತ್ತಳ್ಳಿ ಅವರನ್ನು ನೇಮಕ ಆದೇಶ ಪತ್ರ ನೀಡಿ ಮಾತಾಡಿದ ಅವರು, ಜಾತಿ, ಧರ್ಮ, ಮತ, ಮೇಲು, ಕೀಳು ಹಾಗೂ ಯಾವುದೇ ಕಲಹ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರೆನೀಡಿದರು.

ಸೇವಾದಳದವರಿಗೆ  ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಕೆ.ಪಿ.ಸಿ.ಸಿ. ಮಾರ್ಗದರ್ಶನದಲ್ಲಿ ರಾಜ್ಯದ ಬಲವರ್ಧನೆ ಮಾಡಲು ಕಾರ್ಯೋನ್ಮುಖರಾಗಬೇಕು. ಮುಂಬರುವ ಬಿ.ಬಿ.ಎಂ.ಪಿ. ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರತಿಯೊಬ್ಬರು ಸಿಪಾಯಿಗಳಂತೆ ದುಡಿಯಬೇಕು ಎಂದರು.

Leave a Reply