ಧಾರವಾಡ: ಡಿಸೆಂಬರ್ 3, 2024 ರಂದು ಮಧ್ಯಾಹ್ನ 3.30 ಗಂಟೆಯಿಂದ ಸಾಯಂಕಾಲ 5 ಗಂಟೆಯ ನಡುವಿನ ಅವಧಿಯಲ್ಲಿ ಗರಗ ಗ್ರಾಮದ ಹಳೇ ಪೊಲೀಸ್ ಠಾಣೆ ಹತ್ತಿರ ಇರುವ ಫಿರ್ಯಾದಿ ವಾಸವಿದ್ದ ಲೀಸ್ ಮನೆಯನ್ನು ಯಾರೋ ಆರೋಪಿಗಳು, ಯಾವುದೋ ದುರುದ್ದೇಶದಿಂದ ಅಕ್ರಮ ಪ್ರವೇಶ ಮಾಡಿ. ಮನೆಯಲ್ಲಿದ್ದ ಫಿರ್ಯಾಧಿಯ ಗಂಡ ಮೃತ ಗಿರೀಶ ತಂದೆ ಮಹದೇವಪ್ಪ ಕರಡಿಗುಡ್ಡಅವರನ್ನು ಹರಿತವಾದ ಆಯುಧದಿಂದ ಸಿಕ್ಕಸಿಕ್ಕಲ್ಲಿ ಕೊಚ್ಚಿ ಕೊಲೆ ಮಾಡಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸದರಿ ಆಪಾದಿತರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಫಿರ್ಯಾದಿ ದೀಪಾ ಗಿರೀಶ ಕರಡಿಗುಡ್ಡ, ಇವರು ದಿನಾಂಕ: 03-12-2024 ರಂದು ರಾತ್ರಿ 20.20 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಗರಗ ಪೊಲೀಸ್ ಠಾಣೆಯ ಗರಗ ಪಿಎಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಈ ಬಗ್ಗೆ ಸೂಕ್ತ ತನಿಖೆ ಮತ್ತು ಆರೋಪಿ ಪತ್ತೆಗಾಗಿ ಧಾರವಾಡ ಜಿಲ್ಲಾ ಎಸ್.ಪಿ ಡಾ. ಗೋಪಾಲ ಬ್ಯಾಕೋಡ, ಐಪಿಎಸ್ ನೇತೃತ್ವದಲ್ಲಿ ಎನ್.ವಿ.ಬರಮನಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಎಸ್.ಎಮ್.ನಾಗರಾಜ ಇವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಗಳಾದ ಸಮೀರ ಮುಲ್ಲಾ, ಸಿಪಿಐ ಗರಗ ಮತ್ತು ಸಿದ್ದರಾಮಪ್ಪ ಹುಣ್ಣದ, ಪಿ.ಎಸ್.ಐ ಕಾನ್ಸು, ಎಫ್.ಎಮ್. ಮಂಟೂರ, ಪಿಎಸ್ಐ ಹೆಚ್ಚುವರಿ, ಗರಗ ಪೊಲೀಸ್ ಠಾಣೆ ಇವರ ನೇತೃತ್ವದಲ್ಲಿ ತಂಡ ರಚಿಸಿ ಕೂಡಲೇ ತನಿಖೆ ಪ್ರಾರಂಭಿಸಿ ಪ್ರಕರಣದಲ್ಲಿಯ ಒಟ್ಟು 04 ಜನ ಆರೋಪಿಗಳನ್ನು ಬಂಧಿಸಲಾಗಿದೆ.




