ಕಾಂಗ್ರೆಸ್ ಸೇರಿದ ಹರಿಯಾಣ ಬಿಜೆಪಿ ಉಪಾಧ್ಯಕ್ಷ ಮತ್ತು ಅವರ ಬೆಂಬಲಿಗರು

2 years ago

ಕಾಂಗ್ರೆಸ್ ಮಾತ್ರ ಎಲ್ಲ ಸಮುದಾಯಗಳ ಹಿತಾಸಕ್ತಿ ರಕ್ಷಿಸಬಲ್ಲದು: ಭೂಪಿಂದರ್ ಸಿಂಗ್ ಹೂಡಾ 

ಗುರುಗ್ರಾಮ: ಎಲ್ಲ ಸಮುದಾಯಗಳ ಹಿತಾಸಕ್ತಿ ಭದ್ರವಾಗಿಡುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಹೇಳಿದರು.

ಹರಿಯಾಣ ಬಿಜೆಪಿ ಉಪಾಧ್ಯಕ್ಷರಾಗಿದ್ದ ಶರ್ಮಾ, ತಮ್ಮ 250ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ನಂತರ ಮಾತಮಾಡಿದ ಹೂಡಾ ಅವರು, ಉದ್ಯೋಗ ಸೃಷ್ಟಿಯಲ್ಲಿ ರಾಜ್ಯವನ್ನು ನಂಬರ್ ಒನ್ ಮಾಡಲು ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಹೇಳಿದರು.

ಇದೇ ವೇಳೆ ಗುರುಗ್ರಾಮ್ ಜಿಲ್ಲಾ ಕಾರ್ಯದರ್ಶಿ ಮಹೇಶ್ ವಶಿಷ್ಟ್, ರೋಹ್ಟಕ್ ಲೋಕಸಭೆ ಐಟಿ ಸೆಲ್ ಮುಖ್ಯಸ್ಥ ಪ್ರವೀಣ್ ಮುದ್ಗಿಲ್, ಕಾನೂನು ಕೋಶದ ಬೇನಿ ಪ್ರಸಾದ್ ಗೌರ್, ಪ್ರಜಾಪತಿ ಸಮಾಜ ಗುರುಗ್ರಾಮ್ ಅಧ್ಯಕ್ಷ ಬಸ್ತಿರಾಮ್ ಮತ್ತು ಇತರರು ಕಾಂಗ್ರೆಸ್‌ಗೆ ಸೇರಿದರು.

Leave a Reply