ಶಿವಸೇನಾ (ಯುಬಿಟಿ) ಮುಖವಾಣಿ ‘ಸಾಮ್ನಾ’ದಲ್ಲಿ ಗಂಭೀರ ಆರೋಪ
ಮುಂಬೈ: ಭಾರತೀಯ ಚುನಾವಣೆಗಳು ಹಣ, ಅಪರಾಧ ಮತ್ತು ಹಗರಣಗಳಿಂದ ಮುಕ್ತವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ ಆದರೆ ದುರದೃಷ್ಟವಶಾತ್ ಈ ಬಾರಿಯೂ ಇದು ಸಂಭವಿಸಲಿಲ್ಲ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ), ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದ ಬಿಜೆಪಿ ಮತ್ತು ಚುನಾವಭಾ ಆಯೋಗದ ವಿರುದ್ಧ ಕಿಡಿಕಾರಿದೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ 2024ರ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದು, ವಿಜಯದ ಅಂತರ ಮತ್ತು ಎನ್ಡಿಎ ಗಳಿಸಿದ ಲೋಕಸಭೆ ಸ್ಥಾನಗಳ ಕುರಿತು ಪ್ರಶ್ನಿಸಿದೆ.
ವಿವಿಧ ತಾಂತ್ರಿಕ ವಂಚನೆಗಳಿಂದಾಗಿ, ಮುಂಬೈನಲ್ಲಿ ಒಂದು ಸೇರಿದಂತೆ ದೇಶದಲ್ಲಿ ಬಿಜೆಪಿ ಕನಿಷ್ಠ 60 ರಿಂದ 70 ಸ್ಥಾನಗಳನ್ನು ಗೆದ್ದಿದೆ, ಇದಕ್ಕೆ ಚುನಾವಣಾ ಆಯೋಗ ಜವಾಬ್ದಾರಿಯಾಗಬೇಕು ಎಂದು ಸಂಪಾದಕೀಯದಲ್ಲಿ ಅಭಿಪ್ರಾಯಪಟ್ಟಿದೆ.
ಭಾರತೀಯ ಚುನಾವಭಾ ಆಯೋಗವನ್ನು ಗುರಿಯಾಗಿಸಿಕೊಂಡು ಕಿಡಿಕಾರಿರುವ ಶಿವಸೇನೆ, ಶಿಂಧೆಯವರಿಗೆ ಪಕ್ಷದ ಚಿಹ್ನೆಯನ್ನು ನೀಡುವುದು ಕಾನೂನುಬಾಹಿರ ನಿರ್ಧಾರವಾಗಿದ್ದು, ಜನ ಉದ್ಧವ್ ಠಾಕ್ರೆಗೆ ಮತ ಹಾಕಲು ಬಯಸಿದ್ದರಿಂದ ಮತದಾನದ ಮಾದರಿಯ ಮೇಲೆ ಪರಿಣಾಮ ಬೀರಿತು. ಆದರೆ ಶಿಂಧೆ ಬಣಕ್ಕೆ ಮತ ಹಾಕುವುದರೊಂದಿಗೆ ಕೊನೆಯಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗ ಉದ್ದೇಶಪೂರ್ವಕವಾಗಿ ಒಂದೇ ರೀತಿಯ ಚಿಹ್ನೆಗಳನ್ನು ಒಟ್ಟಿಗೆ ಸೇರಿಸಿದೆ. ಗ್ರಾಮೀಣ ಮತದಾರರಲ್ಲಿ ಗೊಂದಲ ಮೂಡಿಸಿದೆ. ಚುನಾವಣಾ ಆಯೋಗ ಪಕ್ಷಪಾತ ಮಾಡಿದೆ ಎಂದು ಗಂಭೀರ ಆರೋಪ ಮಾಡಿದೆ.
ಅಮೋಲ್ ಕೀರ್ತಿಕರ್ ಅವರ ಸೋಲನ್ನು ಚುನಾವಣಾ ಆಯೋಗದ ಕ್ಲಾಸಿಕ್ ಹಗರಣವಾಗಿದೆ. ಬಿಜೆಪಿ ಕಡಿಮೆ ಅಂತರದಲ್ಲಿ ಗೆದ್ದಲ್ಲೆಲ್ಲಾ ಕೀರ್ತಿಕರ್ ಮಾದರಿ ಪುನರಾವರ್ತನೆಯಾಗಿದೆ. ಮೋದಿ ಮತ್ತು ಶಾಗೆ ಬಹುಮತ ಪಡೆಯಲು ಮತದಾರರು ಬಿಡಲಿಲ್ಲ, ಚುನಾವಣಾ ಆಯೋಗ ತೆರೆಮರೆಯಲ್ಲಿ ಕೆಲಸ ಮಾಡದಿದ್ದರೆ, ಬಿಜೆಪಿ ಕನಿಷ್ಠ 100 ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಗೆಲ್ಲುತ್ತಿತ್ತು, ಆದರೆ ಚುನಾವಣಾ ಆಯೋಗ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಕಟುವಾಗಿ ಹೇಳಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತೀಯ ಸಂವಿಧಾನದ ರಕ್ಷಣೆಯ ಜವಾಬ್ದಾರಿಯುಳ್ಳವರು, ಸರ್ಕಾರ ರಚನೆಯ ಹಕ್ಕು ಚಲಾಯಿಸಲು ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಬಂದ ದಿನ ಮೋದಿಯನ್ನು ಮೊಸರು ಮತ್ತು ಸಕ್ಕರೆಯ ಬಟ್ಟಲಿನೊಂದಿಗೆ ಸ್ವಾಗತಿಸುವ ಮೂಲಕ ಪ್ರಜಾಪ್ರಭುತ್ವದ ಎಲ್ಲಾ ಚಿಹ್ನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿದೆ. ಜೊತೆಗೆ, ಪ್ರಜಾಸತ್ತಾತ್ಮಕ ಸಂವಿಧಾನದಲ್ಲಿ ನಂಬಿಕೆಯಿರುವವರಿಗೆ ಇದು ಗೊಂದಲದ ಚಿತ್ರಗಳು ಎಂದು ಅಭಿಪ್ರಾಯಪಟ್ಟಿದೆ.




