ಮುಂಬೈ: ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮಹಾರಾಷ್ಟ್ರದಲ್ಲಿ ಪ್ರಸ್ತುತ ಎರಡು ರಾಜ್ಯಗಳೊಂದಿಗೆ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಲು ವಿಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯೊಂದಿಗೆ ಕೈಜೋಡಿಸಲು ಚಿಂತನೆ ನಡೆಸಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಮುಂಬೈನಲ್ಲಿ ಪಕ್ಷದ ಸಭೆಯ ನಂತರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಐಎಂಐಎಂನ ರಾಜ್ಯ ಘಟಕದ ಅಧ್ಯಕ್ಷ ಮತ್ತು ಮಾಜಿ ಸಂಸದ ಜಲೀಲ್ ವಾಹಿನಿ, ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಈ ಮಾತನ್ನು ಹೇಳಿದ್ದೆವು, ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣಕ್ಕೆ ಮತ್ತೆ ಕೈಜೋಡಿಸುವಂತೆ ಎಂವಿಎಗೆ ಆಫರ್ ನೀಡುತ್ತಿದ್ದೇವೆ, ಆದರೆ ನಮ್ಮನ್ನು ಮೈತ್ರಿಕೂಟಕ್ಕೆ ಸೇರಿಸಬೇಕೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.
ಮಹಾವಿಕಾಸ್ ಅಘಾಡಿ ನಮ್ಮನ್ನು ಕರೆದುಕೊಂಡು ಹೋದರೆ ಅದು ಅವರಿಗೆ ಅನುಕೂಲವಾಗುತ್ತದೆ, ಇಲ್ಲದಿದ್ದರೆ, ನಾವು ಏಕಾಂಗಿಯಾಗಿ ಮುನ್ನಡೆಯಲು ಸಿದ್ಧರಿದ್ದೇವೆ. ಅವರು ನಮಗೆ ಸ್ವಲ್ಪ ಶಕ್ತಿ ಮತ್ತು ವೋಟ್ ಬ್ಯಾಂಕ್ ಇದೆ ಎಂದು ಅವರು ಭಾವಿಸಿದರೆ, ಅವರು ನಮ್ಮನ್ನು ಕೇಳುತ್ತಾರೆ, ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ.
ಎಂವಿಎ ಘಟಕದ ಶಿವಸೇನೆ (ಯುಬಿಟಿ)ಯೊಂದಿಗೆ ಎಐಎಂಐಎಂ ಕೈಜೋಡಿಸಲು ಯಾವುದೇ ಸಮಸ್ಯೆ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ದೇಶವನ್ನು ಹಾಳುಮಾಡಿದೆ, ಆದ್ದರಿಂದ ನಾವು ಅವರನ್ನು ಯಾವುದೇ ರೀತಿಯಲ್ಲಿ ಸರ್ಕಾರದಿಂದ ದೂರವಿಡಲು ಬಯಸುತ್ತೇವೆ ಎಂದರು. ಜೊತೆಗೆ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಜೊತೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದರು.
ಮಹಾರಾಷ್ಟಷ್ಟ್ರದ ಬಿಜೆಪಿ ಮೈತ್ರಿ ಸರ್ಕಾರದ ‘ಲಡ್ಕಿ ಬಹಿನ್’ ಯೋಜನೆ ಕುರಿತು ಮಾತನಾಡಿದ ಅವರು, ಇಷ್ಟು ವರ್ಷಗಳ ನಂತರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯದಲ್ಲಿ ಅನೇಕ ಸಹೋದರಿಯರಿದ್ದಾರೆ ಎಂದು ಅರಿತುಕೊಂಡಿದ್ದಾರೆ, ಈಗ ಮಹಿಳೆಯರಿಗೆ ಆರ್ಥಿಕ ನೆರವು ನೀಡಿದ ನಂತರ ಅಧಿಕಾರದಲ್ಲಿರುವವರು ಬಹಿರಂಗವಾಗಿ ಮತ ಕೇಳುತ್ತಿದ್ದಾರೆ. ಇದು ಸಹೋದರಿಯರ ಮೇಲೆ ಯಾವುದೇ ಪ್ರೀತಿ ಇಲ್ಲ ಎಂದು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇದೇ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 48 ಸಂಸದ ಸ್ಥಾನಗಳ ಪೈಕಿ ಎಂವಿಎ 31 ಸ್ಥಾನಗಳನ್ನು ಗೆದ್ದುಕೊಂಡರೆ, ಆಡಳಿತಾರೂಢ ಮೈತ್ರಿಕೂಟ 17 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.




