ಬೆಳಗಾವಿ: ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಪಕ್ಕದ ಬೆಳಗಾವಿ ಜಿಲ್ಲೆಯ ಕಿಣೆ ಗ್ರಾಮದಲ್ಲಿ ಅಂತಹದ್ದೇ ಆರೋಪ ಕೇಳಿಬಂದಿದೆ ಎಂದು ಎಸ್ ಡಿ ಟಿ ಐ ನಾಯಕ ಅಪ್ಸರ್ ಕೊಡ್ಲಿಪೇಟೆ ಆತಂಕ ವ್ಯಕ್ತಪಡಿಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಪೋಲಿಸರು ಒಂದು ಬಾರಿ ದೂರು ನೀಡಿದ್ದಾಗ ಅವನನ್ನು ಕರೆದು ವಾರ್ನಿಂಗ್ ಮಾಡಿದ್ದರು. ಆದರೆ ಎರಡನೇ ಬಾರಿ ದೂರು ಕೊಡಲು ಹೋದರೆ ನಾಳೆ ಬಾ ಎನ್ನುತ್ತಿದ್ದಾರೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ತಿಪ್ಪಣ್ಣನ ಕಾಟದಿಂದ ನೊಂದ ಯುವತಿ ಆರೋಪಿಸಿದ್ದಾಳೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೇಮ ಅಂತಾ ಯುವತಿಗೆ ಕಿರುಕುಳ ಕೊಡುತ್ತಿರುವ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27) ಅದೇ ಗ್ರಾಮದ ಬಿಕಾಂ ಓದುತ್ತಿದ್ದ ಯುವತಿ ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದು ಇದರಿಂದ ಯುವತಿ ರೋಸಿಹೋಗಿ ಬೇಸತ್ತಿರುವ ಯುವತಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾಳಂತೆ ಎಂದಿದ್ದಾರೆ.
ದಿನನಿತ್ಯ ಪ್ರೀತಿ ಪ್ರೇಮ ಅಂತಾ ಪೀಡಿಸುತ್ತಿರುವ ಪಾಗಲ್ ಪ್ರೇಮಿಯ ಕಾಟಕ್ಕೆ ಕಾಲೇಜಿಗೆ ಹೋಗದಂತಾಗಿದೆ. ಮನೆಯಿಂದ ಕಾಲೇಜಿಗೆ ಹೋಗೋದನ್ನೇ ಕಾಯುತ್ತ ಕೂರುತ್ತಾನಂತೆ ಪಾಗಲ್ ಪ್ರೇಮಿ. ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಟ ಕೊಡೋದು ಮಾಡ್ತಾನಂತೆ. ಇದರಿಂದ ಬೇಸತ್ತಿರುವ ಯುವತಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ.
ಮತ್ತೊಂದು ನೇಹಾ, ಅಂಜಲಿ ಘಟನೆಯಾಗುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪಾಗಲ್ ಪ್ರೇಮಿಯ ಹೆಡೆಮುರಿ ಕಟ್ಟಬೇಕೆಂದು @SPBelagavi, @DCP_LO_Belagavi ರವರಲ್ಲಿ ಆಗ್ರಹಿಸಿದ್ದಾರೆ.




