ಯಾವುದೇ ಸಮಸ್ಯೆಗಳಿಗೆ ವಿಶ್ವಗುರು ಮೋದಿ ಹೊಣೆಗಾರಿಕೆ ಹೊರುವುದಿಲ್ಲ: ಪ್ರಿಯಾಂಕ್ ಖರ್ಗೆ

7 months ago

ಈ ದೇಶದ ಯಾವುದೇ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವಾಗಲಿ, ವಿಶ್ವಗುರು ಮೋದಿಯವರಾಗಲಿ ಹೊಣೆಗಾರಿಕೆಯನ್ನು ಹೊರುವುದಿಲ್ಲ! ಹೊಣೆಗಾರಿಕೆಯನ್ನು ನೆನಪಿಸಿದರೆ ಬಿಜೆಪಿಯವರು ಸಹಿಸುವುದೂ ಇಲ್ಲ.

ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಪ್ರಧಾನಿಯವರ ಭೇಟಿಗೆ ಸಮಯ ಕೇಳಿ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಕೇಳುವುದು ಮೂರ್ಖತನ ಎಂದಿದ್ದಾರೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ. ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ  ದೇವೇಂದ್ರ ಫಡ್ನವೀಸ್  ಅವರು ಕಬ್ಬು ಬೆಳೆಗಾರರಿಗೆ MSP ಮತ್ತು FRP ನಿಗದಿಪಡಿಸಲು ಆಗ್ರಹಿಸಿ ಸ್ವತಃ ಪ್ರಹ್ಲಾದ್ ಜೋಶಿಯವರಿಗೇ ಪತ್ರ ಬರೆದಿದ್ದರು.

ದೇವೇಂದ್ರ ಫಡ್ನವೀಸ್ ಅವರದ್ದೂ ಮೂರ್ಖತನವೇ?

BJP ಸಂಸದರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ, ಅದು ಬಿಟ್ಟು ಆರೋಪ ಮಾಡುವುದೇ ರಾಜಕೀಯದ ಪರಮೋದ್ದೇಶ ಎಂಬ ಧೋರಣೆಯನ್ನು ಸರಿಯಲ್ಲ.

ಅಥವಾ

ಕೇಂದ್ರ ಸರ್ಕಾರದ ಸಹಕಾರ ಮತ್ತು ಸ್ಪಂದನೆ ಕೇವಲ ಬಿಜೆಪಿ ಆಡಳಿತದ ರಾಜ್ಯಗಳಿಗೆ ಮಾತ್ರ ಇರುತ್ತದೆ ಎಂಬ ನಿಮ್ಮ ಆಂತರಿಕ ನೀತಿಯನ್ನು ಬಹಿರಂಗ ಘೋಷಣೆಯನ್ನಾದರೂ ಮಾಡಿಬಿಡಿ!

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

Leave a Reply