ಧಾರವಾಡ: ನವೆಂಬರ್ 15, 2025 ರಂದು ಧಾರವಾಡ ಪೂನಾ ಬೆಂಗಳೂರು ಹೆದ್ದಾರಿ ಹತ್ತಿರದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಮಾವು ಬೆಳೆಯ ಬೇಸಾಯ, ರೋಗ ಹಾಗೂ ಕೀಟ ನಿರ್ವಹಣೆ ಮತ್ತು ಮಾವು ಸಂಸ್ಕರಣೆ ಹಾಗೂ ಮಾರಾಟ ತಂತ್ರಜ್ಞಾನಗಳ ಕುರಿತು ತರಬೇತಿ ಆಯೋಜಿಸಲಾಗಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ತರಬೇತಿ ನಂತರ, ಆಸಕ್ತ ಮಾವು ಬೆಳೆಗಾರನ್ನು ಮಾವು ಬೆಳೆ ತೋಟದ ಕ್ಷೇತ್ರಗಳಿಗೆ, ತಜ್ಞರೊಂದಿಗೆ ಭೇಟಿ ನೀಡಿಸಿ, ತಿಳುವಳಿಕೆ ನೀಡಲಾಗುತ್ತದೆ. ಆಸಕ್ತ ಮಾವು ಬೆಳೆಗಾರರು ತರಬೇತಿಗೆ ರೂ.500 ಗಳನ್ನು ಸಂದಾಯ ಮಾಡಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8277800110 ಗೆ ಸಂಪರ್ಕಿಸಬಹುದು.




