ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ರಾಜ್ಯ ಬಿಜೆಪಿ ಗೆಲುವಿನ ಮಾನದಂಡ ಆಧರಿಸಿಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಹೈಕಮಾಂಡ್ ಸೂಚನೆ ಆಧರಿಸಿ 75 ವರ್ಷದ ಆಸುಪಾಸಿನಲ್ಲಿರುವ ನಾಯಕರನ್ನು ಪರಿಗಣಿಸದಿರಲು ತೀರ್ಮಾನಿಸಿದ್ದು, ಬಹುತೇಕ ಕ್ಷೇತ್ರದಲ್ಲಿ ಹೊಸಬರಿಗೆ ಮನ್ನಣೆ ಹಾಕಲಾಗುತ್ತಿದೆ. ಕ್ಷೇತ್ರವಾರು ಉಸ್ತುವಾರಿ ಹಾಗೂ ಜಿಲ್ಲಾ ಘಟಕಗಳು ನೀಡಿರುವ ವರದಿ ಆಧರಿಸಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಫೆಬ್ರವರಿ ಮೊದಲ ವಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರಿಗೆ ಪಟ್ಟಿ ಸಲ್ಲಿಕೆಯಾಗಲಿದೆ.
ಸಂಭವನೀಯ ಅಭ್ಯರ್ಥಿಗಳು:
- ಚಿಕ್ಕೋಡಿ – ಅಣ್ಣಾ ಸಾಹೇಬ್ ಜೊಲ್ಲೆ/ರಮೇಶ್ ಕತ್ತಿ
- ಬೆಳಗಾವಿ – ಶ್ರದ್ದಾ ಶೆಟ್ಟರ್ /ಜಗದೀಶ್ ಶೆಟ್ಟರ್
- ಬಾಗಲಕೋಟೆ – ಬಸನಗೌಡ ಪಾಟೀಲ್ ಯತ್ನಾಳ್/ಮುರುಗೇಶ್ ನಿರಾಣಿ
- ಬಿಜಾಪುರ – ಅರವಿಂದ ಲಿಂಬಾವಳಿ/ ಗೋಪಾಲ್ ಕಾರಜೋಳ
- ಕಲಬುರಗಿ – ಡಾ.ಉಮೇಶ್ ಜಾಧವ್
- ರಾಯಚೂರು – ಅಮರೇಶ್ ನಾಯಕ್/ರಾಜುಗೌಡ ನಾಯಕ್
- ಬೀದರ್ – ಭಗವಂತ ಖೂಬಾ
- ಕೊಪ್ಪಳ – ಜನಾರ್ದನ ರೆಡ್ಡಿ/ ಕರಡಿ ಸಂಗಣ್ಣ
- ಬಳ್ಳಾರಿ – ಬಿ.ಶ್ರೀರಾಮುಲು
- ಹಾವೇರಿ – ಬಸವರಾಜ ಬೊಮ್ಮಾಯಿ/ಸಂದೀಪ್ ಪಾಟೀಲ್
- ಧಾರವಾಡ – ಪ್ರಹ್ಲಾದ್ ಜೋಷಿ/ ಜಗದೀಶ್ ಶೆಟ್ಟರ್
- ಉತ್ತರ ಕನ್ನಡ – ಅನಂತಕುಮಾರ್ ಹೆಗಡೆ/ ವಿಶ್ವೇಶ್ವರ ಹೆಗಡೆ ಕಾಗೇರಿ
- ದಾವಣಗೆರೆ – ಜಿ.ಎಂ.ಸಿದ್ದೇಶ್/ಎಂ.ಪಿ.ರೇಣುಕಾಚಾರ್ಯ/ಡಾ.ರವಿಕುಮಾರ್
- ಶಿವಮೊಗ್ಗ – ಬಿ.ವೈ.ರಾಘವೇಂದ್ರ
- ಉಡುಪಿ-ಚಿಕ್ಕಮಗಳೂರು -ಶೋಭಾ ಕರಂದ್ಲಾಜೆ/ಸಿ.ಟಿ.ರವಿ/ಪ್ರಮೋದ್ ಮಧ್ವರಾಜ್
- ದಕ್ಷಿಣ ಕನ್ನಡ – ಬ್ರಿಜೇಶ್ ಚೌತುಲ/ಅರುಣ್ ಪುತ್ತಿಲ
- ಚಿತ್ರದುರ್ಗ – ಎ.ನಾರಾಯಣಸ್ವಾಮಿ/ ಹನುಮಂತಪ್ಪ
- ತುಮಕೂರು- ಜೆ.ಸಿ.ಮಾಧುಸ್ವಾಮಿ/ ಹೆಬ್ಬಾಕ ರವಿಶಂಕರ್
- ಮಂಡ್ಯ – ಜೆಡಿಎಸ್
- ಮೈಸೂರು-ಕೊಡಗು – ಪ್ರತಾಪ್ ಸಿಂಹ
- ಚಾಮರಾಜನಗರ -ಡಾ.ಎನ್.ಎಸ್.ಮೋಹನ್
- ಬೆಂಗಳೂರು ಗ್ರಾಮಾಂತರ –ಜೆಡಿಎಸ್
- ಬೆಂಗಳೂರು ಉತ್ತರ -ಡಿ.ವಿ.ಸದಾನಂದಗೌಡ
- ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್/ಸುಮಲತಾ
- ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ/ ತೇಜಸ್ವಿನಿ ಅನಂತ ಕುಮಾರ್
- ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್/ ಅಲೋಕ್ ವಿಶ್ವನಾಥ್
- ಕೋಲಾರ – ಮುನಿಸ್ವಾಮಿ/ ನಾರಾಯಣ ಸ್ವಾಮಿ




