ಬೆಂಗಳೂರು: ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಬಳಸಿಕೊಳ್ಳಲು ಸಹಾಯಕವಾಗಿದ್ದು ಆತನ ಹುದ್ದೆ, ಆತನ ಕುಟುಂಬದ ಹಿನ್ನೆಲೆ, ಆತನ ಕುಟುಂಬದ ಪ್ರಭಾವ ಎಂದು ಕೆಪಿಸಿಸಿ ಹೇಳಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕೆಪಿಸಿಸಿ, ಆತನಿಗೆ ಈ ಧೈರ್ಯ ಬರುವುದರಲ್ಲಿ ಕುಮಾರಸ್ವಾಮಿಯವರ ಪಾಲೂ ಇದೆ, ಕುಮಾರಸ್ವಾಮಿಯವರಿಗೆ ಅವರ ಕುಟುಂಬ ಸದಸ್ಯನೊಬ್ಬನ ಹೇಯ ಕೃತ್ಯದ ಹೊಣೆಯ ಪಾಲನ್ನೂ ಹೊರಬೇಕಿದೆ ಎಂದಿದೆ.
ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ತಮ್ಮ ಕುಟುಂಬದವರ ಕುಕೃತ್ಯಕ್ಕೆ ಕ್ಷಮೆ ಕೇಳುವ ಸೌಜನ್ಯ ತೋರಲಿಲ್ಲ ಎಂದರೆ ಇದು ನೈತಿಕ ಹಾಗೂ ಹೊಣೆಗಾರಿಕೆಯ ರಾಜಕಾರಣಕ್ಕೆ ಮಾಡಿದ ಮಹಾ ಅಪಚಾರ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ತಮಗೂ ತಮ್ಮ ಅಣ್ಣನ ಮಗ ಪ್ರಜ್ವಲ್ ಕೃತ್ಯಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡುವ ಕುಮಾರಸ್ವಾಮಿಯವರು ಅದೇ ಪ್ರಕರಣದಲ್ಲಿ ಒಕ್ಕಲಿಗ ಸಮುದಾಯದ ಸಂಬಂಧ ಜೋಡಿಸಲು ಹೊರಡುತ್ತಾರೆ ಎಂದಿದೆ.
ತಮ್ಮ ಅಣ್ಣನ ಮಗನ ಕೃತ್ಯಕ್ಕೆ ಸಂಬಂಧವಿಲ್ಲ ಎನ್ನುವುದಾದರೆ ತಮ್ಮವರ ಮೇಲಿನ ಆರೋಪ ಒಂದಿಡೀ ಸಮುದಾಯಕ್ಕೆ ಹೇಗೆ ಸಂಬಂಧಿಸುತ್ತದೆ? ಇದ್ಯಾವ ಥಿಯರಿ? ಎಂದು ಪ್ರಶ್ನಿಸಿದೆ.




