ಜಾತ್ಯತೀತ, ಸಮಾಜವಾದಿ ಪದಗಳನ್ನು ತೆಗೆದು ಹಾಕಿದ್ದು ತಪ್ಪು: ನವೀನ್ ಪಟ್ನಾಯಕ್

1 year ago

ಭುವನೇಶ್ವರ: 75ನೇ ಸಂವಿಧಾನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಪ್ರದರ್ಶಿಸಲಾದ ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಎರಡು ಪ್ರಮುಖ ಪದಗಳನ್ನು ಅಳಿಸುವ ಮೂಲಕ ಬಿಜೆಪಿ ಸರ್ಕಾರ  ತಪ್ಪು ಮಾಡಿದೆ ಎಂದು ವಿಪಕ್ಷ ನಾಯಕ ಮತ್ತು ಮಾಜಿ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.

ಜಾತ್ಯತೀತ, ಸಮಾಜವಾದಿ ಎರಡು ಪದಗಳು ಭಾರತದ ಸಂವಿಧಾನದ ಪೀಠಿಕೆಯ ಭಾಗವಾಗಿರಬೇಕು. ಇದು ತಪ್ಪು. ಇದನ್ನು ಮಾಡಬಾರದಿತ್ತು. ಭಾರತ ಜಾತ್ಯತೀತ ರಾಷ್ಟ್ರವಾಗಿದೆ ಎಂದರು.

ವಿಧಾನಸಭೆಯಲ್ಲಿ ಬಿಜೆಡಿ ನಾಯಕರು ಈ ವಿಷಯ ಪ್ರಸ್ತಾಪಿಸಿ, ತಪ್ಪನ್ನು ಸರಿಪಡಿಸುವಂತೆ ಕೋರಿ ಗದ್ದಲ ಸೃಷ್ಟಿಸಿದ್ದರು.

ಬಿಜೆಡಿ ನಾಯಕರ ಭಾರತದ ಸಂವಿಧಾನಕ್ಕೆ ಅವಮಾನ ಮಾಡಿದ ಆರೋಪವನ್ನು ಉಲ್ಲೇಖಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಮುಖೇಶ್ ಮಹಾಲಿಂಗ್, ಸದನದಲ್ಲಿ ಪೀಠಿಕೆಯು ದೇಶದ ಹೆಮ್ಮೆ ಮತ್ತು ವೈಭವವಾಗಿದೆ. ಸರ್ವರಿಗೂ ಪವಿತ್ರವಾಗಿರುವ ಸಂವಿಧಾನಕ್ಕೆ ರಾಜ್ಯ ಸರಕಾರ ಅಗೌರವ ತೋರಿಲ್ಲ ಎಂದರು.

Leave a Reply