ಪ್ರಚಲಿತ ವಿದ್ಯಮಾನಗಳ ಕುರಿತು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬರಹದ ಕನ್ನಡ ರೂಪ. ಮಾಲ್ಗುಡಿ ಎಕ್ಸ್ ಪ್ರೆಸ್ ಓದುಗರಿಗಾಗಿ…
ಗೋದಿ ಮೀಡಿಯಾ ನೆಹರೂ ಅವರನ್ನು ಇತಿಹಾಸದ ಪುಟಗಳಿಂದ ಅಳಿಸಲು ಬಯಸುತ್ತದೆ. ನೆಹರೂ ಅವರನ್ನು ಅಳಿಸಿ ಸ್ವಾತಂತ್ರ್ಯದ ವರ್ಷಾಚರಣೆಯನ್ನು ಆಚರಿಸಲು ಅವರು ಬಯಸಿದರೆ, ಅವರು ಸ್ವಾತಂತ್ರ್ಯವನ್ನು ಆಚರಿಸುತ್ತಿಲ್ಲವೆಂದರ್ಥ. ಆ ನಿರೂಪಕ ಇದನ್ನು ಏಕೆ ಮಾಡಲು ಅವಕಾಶ ನೀಡಿದರು? ಎಂದು ನನಗೆ ತಿಳಿದಿಲ್ಲ. ಹತ್ತು ವರ್ಷಗಳ ಕಾಲ ಆಳ್ವಿಕೆ ನಡೆಸಿದರೆ, ಇತಿಹಾಸವು ಅವರ ಗುಲಾಮಗಿರಿಯನ್ನು ಪ್ರಾರಂಭಿಸುತ್ತದೆ ಎಂಬ ತಿಳುವಳಿಕೆ ಇತಿಹಾಸದ ಕುರಿತು ಅವರಿಗಿದೆಯೇ? ಆ ನಿರೂಪಕರ ಆತ್ಮವು ಸ್ವತಃ ಅವರಿಗೆ ಏನು ಹೇಳುತ್ತದೆ? ಟಿಆರ್ಪಿಯಂತೂ ಸಣ್ಣ ಆಟದ ಗುಂಪಿಗೂ ಸಿಗುತ್ತದೆ. ಆದರೆ ಜನಸಮೂಹದ ಆಧಾರದಲ್ಲಿ ನೆಹರೂ ಅವರನ್ನು ನಾಶ ಮಾಡಬೇಕೆನ್ನುವವರಿಗೆ ಇಷ್ಟು ಗೊತ್ತಿರಬೇಕು; ರಸ್ತೆಯ ಹೆಸರು ಬದಲಾಯಿಸಿದರೆ ರಸ್ತೆಯ ಹೆಸರು ಬದಲಾಗುತ್ತದೆ, ರಸ್ತೆಯ ಇತಿಹಾಸ ಬದಲಾಗುವುದಿಲ್ಲ.
ಗೋದಿ ಮಾಧ್ಯಮಗಳು ಅಂದಿನ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿವೆ. ಅವರ ಹೋರಾಟದ ಬೆವರಿನ ಮೇಲೆ ತಮ್ಮ ಯಜಮಾನರಿಂದ ಸಿಕ್ಕು ತಿಂದ ಉಪ್ಪನ್ನು ಗೋದಿ ಮಾಧ್ಯಮಗಳು ಸವರುತ್ತಿವೆ. ನೂರು ಸುಳ್ಳು ಹೇಳಿದ ಮಾಲೀಕರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೆಹರೂ ಅವರನ್ನು ದ್ವೇಷಿಸಿ ಸ್ವಾತಂತ್ರ್ಯ ಸಂಭ್ರಮಾಚರಣೆ ಮಾಡುತ್ತಿದ್ದೀರಾ ಎಂದರೆ, ಇಡೀ ಹೋರಾಟವನ್ನೇ ಅವಮಾನಿಸುತ್ತಿದ್ದೀರಿ. ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಕೂಡ ನೆಹರು ಅವರನ್ನು ನಾಯಕನೆಂದು ಸ್ವೀಕರಿಸಿದ್ದರು.
ಈ ದೇಶದ ಜನರು ಗೋದಿ ಮಾಧ್ಯಮದ ಜಾಲದಿಂದ ಹೊರಬರುವ ತನಕ, ಅವರಿಗೆ ಮುಕ್ತಿಯಿಲ್ಲ. ಅವರ ಜೀವನವು ಸ್ವತಂತ್ರ ದೇಶದಲ್ಲಿ ಗುಲಾಮರ ಜೀವನವಾಗಿದೆ ಎಂಬ ನನ್ನ ನಂಬಿಕೆಯನ್ನು ಇಂದು ಗೋದಿ ಮಾಧ್ಯಮವು ದೃಢಪಡಿಸುತ್ತದೆ. ಇಂದಿನ ಯುಗದಲ್ಲಿ ಈ ದೇಶವನ್ನು ಉಳಿಸುವ ಮೊದಲ ಹೋರಾಟವೆಂದರೆ ಗೋದಿ ಮಾಧ್ಯಮಗಳಿಂದ ಉಳಿಸುವ ಹೋರಾಟ. ಮುಂದೊಂದು ದಿನ ಈ ದೇಶದ ಜನ ಗೋದಿ ಮಾಧ್ಯಮಗಳನ್ನು ಮನೆಯಿಂದ ಹೊರ ಹಾಕಬೇಕಾಗುತ್ತದೆ.
ಎಲ್ಲಿಯವರೆಗೆ ಆ ದಿನ ಬರುವುದಿಲ್ಲವೋ ಅಲ್ಲಿಯವರೆಗೂ ತಾವು ಗುಲಾಮ ಪ್ರೇಕ್ಷಕನಾಗಿ ಗೋದಿ ಮಾಧ್ಯಮದ ಮುಂದೆ ತಲೆಬಾಗಿ ನಿಲ್ಲುತ್ತೀರಿ. ಈ ದೇಶದಲ್ಲಿ ಪತ್ರಿಕೋದ್ಯಮವು ಸ್ವಾತಂತ್ರ್ಯದ ಜ್ಯೋತಿಯಾಗಿದೆ. ಆದರೆ ಇಂದು ನೀವು ಗೋದಿ ಮಾಧ್ಯಮದ ಮೂಲಕ ಗುಲಾಮರಾಗಿದ್ದೀರಿ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೇನಿದೆ? ಅಮೃತ ಮಹೋತ್ಸವದ ಹೆಸರಿನಲ್ಲಿ ವಿಷ ಉಗುಳಲಾಗುತ್ತಿದೆ. ನೆಹರೂ ಅವರನ್ನು ದ್ವೇಷಿಸಲು ದಾರಿ ಹುಡುಕಲಾಗುತ್ತಿದೆ. ವಿಷಾದ. ಇಷ್ಟೆಲ್ಲ ಬೆಳವಣಿಗೆಗಳ ನಂತರವೂ ಕೋಟಿಗಟ್ಟಲೆ ಜನರು ನೆಹರೂ ಹಾರಿಸಿದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ; ಕಾರು, ಮನೆ, ಕಟ್ಟಡಗಳ ಮೇಲೆ ಬೀಸುತ್ತಾ ನಿಂತಿದ್ದಾರೆ.
ಗೋದಿ ಮೀಡಿಯಾ ಮುರ್ದಾಬಾದ್. ಮಹಾತ್ಮ ಗಾಂಧಿ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಜವಾಹರ್ ಲಾಲ್ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಸರ್ದಾರ್ ಪಟೇಲ್ ಬದುಕಿದ್ದಾರೆ.
ಗೋದಿ ಮೀಡಿಯಾ ಮುರ್ದಾಬಾದ್. ಡಾ ಅಂಬೇಡ್ಕರ್ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಭಗತ್ ಸಿಂಗ್ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್, ಚಂದ್ರಶೇಖರ್ ಆಜಾದ್ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್, ಉಧಮ್ ಸಿಂಗ್ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್, ಕಸ್ತೂರಬಾ ಗಾಂಧಿ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಆಚಾರ್ಯ ಕೃಪಲಾನಿ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಸ್ವಾತಂತ್ರ್ಯದ ಪ್ರತಿಯೊಬ್ಬ ಸೈನಿಕನಿಗೂ ಜಿಂದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಗೋದಿ ಮೀಡಿಯಾ ಮುರ್ದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಗೋದಿ ಮೀಡಿಯಾ ಮುರ್ದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಗೋದಿ ಮೀಡಿಯಾ ಮುರ್ದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಗೋದಿ ಮೀಡಿಯಾ ಮುರ್ದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಗೋದಿ ಮೀಡಿಯಾ ಮುರ್ದಾಬಾದ್.
ಗೋದಿ ಮೀಡಿಯಾ ಮುರ್ದಾಬಾದ್. ಗೋದಿ ಮೀಡಿಯಾ ಮುರ್ದಾಬಾದ್.
ಈ ಘೋಷಣೆಯನ್ನು ನಿಮ್ಮ ಮನಸ್ಸಿನಲ್ಲಿ ಮತ್ತೆ ಮತ್ತೆ ಪುನರುಚ್ಛರಿಸಿ. ನಿಮ್ಮೊಳಗೆ ನೈತಿಕ ಶಕ್ತಿ ಬರುತ್ತದೆ. ದೇಶಕ್ಕಾಗಿ ಏನಾದರೂ ಮಾಡುವ ಉತ್ಸಾಹವಿರುತ್ತದೆ. ನಿಮಗೆ ಮೋಕ್ಷ ಸಿಗುತ್ತದೆ. ಜೈ ಹಿಂದ್.
– ರವೀಶ್ ಕುಮಾರ್, ಹಿರಿಯ ಪತ್ರಕರ್ತ, ಎನ್.ಡಿ.ಟಿವಿ



