ಉತ್ತಮ ಶಿಕ್ಷಣ ವ್ಯವಸ್ಥೆ ದೇಶದಲ್ಲೇ ಕರ್ನಾಟಕ ಮೊದಲು: ಅಶ್ವಥ್ ನಾರಾಯಣ್

4 years ago

ಬೆಂಗಳೂರು: ನಾಗರಭಾವಿಯಲ್ಲಿರುವ ತೆರಿಗೆ ಭವನದಲ್ಲಿ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಲ್ಲಿ ಕೆ.ಪಿ.ಎಸ್.ಸಿ.ಯಿಂದ ವಿವಿಧ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಮತ್ತು ಇಂಡಿಯಾ ಫಾರ್ ಐಎಎಸ್ ಅಪ್ಲಿಕೇಷನ್ (APP) ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಯಿತು.

ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಅವರು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸಪೂಜಾರಿ, ಡಾ. ಮಹಾಂತೇಶ್ ಜಿ. ಕೆ., ಸಂಸ್ಥಾಪಕರು ಸಮರ್ಥನಂ ಟ್ರಸ್ಟ್ , ಇಂಡಿಯ ಫಾರ್ ಐ.ಎಸ್.ಸಂಸ್ಥೆಯ ಅಧ್ಯಕ್ಷರಾದ ಡಾ||ಸಿ. ಎಸ್ ಕೇದಾರ್, IAS Retd ಮತ್ತು ಇಂಡಿಯ ಫಾರ್ ಐ.ಎ.ಎಸ್.ಆಡಳಿತ ಮಂಡಳಿಯ ಡಾ||ಎನ್ ಶ್ರೀಕಂಠಯ್ಯ, ನಯನ್‌ಕುಮಾರ್ ಕೆ.ಎಂ.ಬಿ ಎಸ್., ನವಿನ್ ಪಿ.ಸಿ. ಶ್ರೀನಿವಾಸ್ ರವರು ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಕೆ.ಎ.ಎಸ್.ಅಧಿಕಾರಿಯಾಗಿ ನೇಮಕರಾದ ಇಂಡಿಯ ಫಾರ್ ಐ.ಎ.ಎಸ್.ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ಅಶ್ವಥ್ ನಾರಾಯಣ್ ಅವರು ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿರುವ ಇಂಡಿಯ ಫಾರ್ ಐ.ಎ.ಎಸ್.ಸಂಸ್ಥೆ ಉತ್ತಮ ಸಾಧನೆ ಮಾಡಿದೆ ಎಂದರು.

ಸರ್ಕಾರದಲ್ಲಿ ಸೇವೆ ಸಲ್ಲಿಸಲು ಪುಣ್ಯ ಮಾಡಿರಬೇಕು,ಅಧಿಕಾರಿಗಳನ್ನು ದೇವರಂತೆ ಜನ ಸಾಮಾನ್ಯರು ನೋಡುತ್ತಾರೆ.ಐ.ಎ.ಎಸ್.ಮತ್ತು ಐ.ಎಫ್.ಎಸ್.ಹುದ್ದೆಗಳಲ್ಲಿ ಕನ್ನಡಿಗರು ಹೆಚ್ಚು ಆಯ್ಕೆಯಾಗಬೇಕು.ಸ್ಕೂಲ್,ಕಾಲೇಜು ಶಿಕ್ಷಣದಲ್ಲಿ ನೂತನ ನೀತಿ ತರಲಾಗಿದೆ.ವಿಷಯಗಳ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.ಉತ್ತಮ ಶಿಕ್ಷಣ ವ್ಯವಸ್ಥೆಗೆ ಬದಲಾವಣೆ ತರಲಾಗಿದೆ ಇದು ದೇಶದಲ್ಲಿ ಕರ್ನಾಟಕ ಮೊದಲು ಎಂದರು.

3 ವರ್ಷದ ಮಕ್ಕಳಿಂದ ಶಾಲಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ, 3ರಿಂದ12ವಯಸ್ಸಿನ ಒಳಗಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ, ಉನ್ನತ ಶಿಕ್ಷಣ ಬಹಳ ಸುಲಭವಾಗುತ್ತದೆ. ಕರ್ನಾಟಕದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ತಂದೆ,ತಾಯಿ ಮಗುವಿನ ಮೊದಲು ಗುರುವಾಗಿ ಸರಿಯಾದ ಮಾರ್ಗದರ್ಶನ ನೀಡಬೇಕು.ಉತ್ತಮ ಶಿಕ್ಷಣ ಎಲ್ಲರಿಗೂ ಲಭಿಸಿದಾಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ ಶಿಕ್ಷಣ,ಕ್ರೀಡೆ, ರಾಜಕೀಯ ಯಾವುದೇ ಕ್ಷೇತ್ರವಾಗಿರಬಹುದು ಗುರುವಿನ ಸಲಹೆ,ಮಾರ್ಗದರ್ಶನ ಸಿಕ್ಕರೆ ಉತ್ತಮ ಸಾಧನೆ ಮಾಡಲು ಸಾಧ್ಯ. ಸರ್ಕಾರಿ ಹುದ್ದೆ ಸಿಗಬೇಕಾದರೆ ಸಾಮಾನ್ಯವಲ್ಲ, ರಾಜ್ಯದಲ್ಲಿ 6ಲಕ್ಷದ 50ಹುದ್ದೆಗಳು ಖಾಲಿ ಇವೆ.ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬುದ್ದಿವಂತರು ಮಾತ್ರ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ. ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳು ಸಮಾಜ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಭಾರತರತ್ನ ಸರ್.ಎಂ.ವಿ.ರವರ ಸರಳ ಆಡಳಿತ ಆಳವಡಿಸಿಕೊಳ್ಳಬೇಕು, ಸರ್ಕಾರದ ಯಾವುದೇ ವಸ್ತು,ಅಧಿಕಾರವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದರು.

Leave a Reply