ಸುಳ್ಳು ಆಶ್ವಾಸನೆ ನೀಡಿಯೇ ರಾಜ್ಯದ ಗದ್ದುಗೆ ಏರಿರುವ ಕಾಂಗ್ರೆಸ್: ಪ್ರಹ್ಲಾದ್ ಜೋಷಿ

1 year ago

ಬರೀ ಸುಳ್ಳು ಆಶ್ವಾಸನೆ ನೀಡಿಯೇ ರಾಜ್ಯದ ಗದ್ದುಗೆ ಏರಿರುವ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಒಂದಲ್ಲೊಂದು ರೀತಿಯಲ್ಲಿ ಶ್ರೀಸಾಮಾನ್ಯನಿಗೆ ಬರೆ ಎಳೆಯುತ್ತಲೇ ಇದೆ.

ಮೊದ ಮೊದಲು ಉಚಿತ ವಿದ್ಯುತ್ ಅಂದರು, ನಂತರ ವಿದ್ಯುತ್ ದರ ಹೆಚ್ಚಳ ಮಾಡಿದರು‌. ಹಾಲಿನ ಬೆಲೆ ಹೆಚ್ಚಾಯ್ತು, ಪೆಟ್ರೋಲ್- ಡಿಸೇಲ್ ಮೇಲೆ ಹೆಚ್ಚುವರಿ ಸೆಸ್ ಹಾಕಿದರು. ಆಸ್ತಿ ನೊಂದಣಿ ದುಬಾರಿ ಮಾಡಿ, ಇದೀಗ ಸರ್ಕಾರಿ ಬಸ್ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳ ಮಾಡಿ ಕಾಂಗ್ರೆಸ್ ಸರ್ಕಾರ ಜನರಿಗೆ ಮಂಕು ಬೂದಿಯನ್ನು ಎರಚುತ್ತಿದೆ.

ಸಾರಿಗೆ ಸಂಸ್ಥೆಯ ನೌಕರರಿಗೆ ಸಂಬಳ ನೀಡಲು ಹಣವಿಲ್ಲಾ. ಬರೊಬ್ಬರಿ 2 ಸಾವಿರ ಕೋಟಿ ರೂಪಾಯಿ ಸಾಲ ಮಾಡುವ ಹಂತಕ್ಕೆ ಸಾರಿಗೆ ಸಂಸ್ಥೆಯನ್ನು ದೂಡಿರುವುದು ಈ ಕಾಂಗ್ರೆಸ್ ಸರ್ಕಾರ.

ಈಗಲೇ ರಾಜ್ಯ ಸರ್ಕಾರದ ಖಜಾನೆ ಖಾಲಿ ಖಾಲಿಯಾಗಿದೆ‌. ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮೇಲೆ ಈ ಕಾಂಗ್ರೆಸ್ ಸರ್ಕಾರ ಬರೆ ಎಳೆಯೊಕ್ಕೂ ಯಾವ ಯೋಚನೆಯೂ ಮಾಡೊದಿಲ್ಲಾ.

– ಪ್ರಹ್ಲಾದ್ ಜೋಷಿ ಕೇಂದ್ರ, ಸಚಿವ

Leave a Reply