ಇವಿಎಂ ಪರ ವಕಾಲತ್ತು ವಹಿಸುವುದು ನೋಡಿದರೆ ಇದರಲ್ಲಿ ಬಿಜೆಪಿಗೆ ಲಾಭ ಇಲ್ಲದಿರಲು ಸಾಧ್ಯವೇ?: ಕೆಪಿಸಿಸಿ

2 years ago

ಬೆಂಗಳೂರು: ಜಗತ್ತಿನ ಯಾವ ಮುಂದುವರೆದ ರಾಷ್ಟ್ರಗಳೂ ಚುನಾವಣೆಗೆ ಇವಿಎಂ ಯಂತ್ರಗಳನ್ನು ಬಳಸುತ್ತಿಲ್ಲ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದೆ.

ಎಕ್ಸ್ ಸಂಸ್ಥೆಯ ಎಲಾನ್ ಮಸ್ಕ್ ಚುನಾವಣೆಗಳಲ್ಲಿ ಇವಿಎಂ ಬಳಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ, ದೇಶದ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಮತ್ತು ನೇತಾರರು ಪ್ರತಿಕ್ರಿಯೆ ನೀಡಿದ್ದು, ಇದರ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ತಾಂತ್ರಿಕತೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಕೂಡ ಇವಿಎಂ ಬಳಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಕಂಡುಕೊಂಡು 2018ರಿಂದ ಇವಿಎಂ ಬಳಕೆಯನ್ನು ಸ್ಥಗಿತಗೊಳಿಸಿದೆ ಎಂದಿದೆ.

ಜಗತ್ತಿನ ತಂತ್ರಜ್ಞಾನದ ದಿಗ್ಗಜರೆಲ್ಲ ಇವಿಎಂ ಬಳಕೆಯಲ್ಲಿ ಭ್ರಷ್ಟಾಚಾರ ಸಾಧ್ಯ ಎನ್ನುವುದನ್ನು ಪ್ರತಿಪಾದಿಸಿದ್ದಾರೆ. ಹೀಗಿದ್ದೂ ಬಿಜೆಪಿ ಹಾಗೂ ಚುನಾವಣಾ ಆಯೋಗ ಇವಿಎಂ ಪರ ವಕಾಲತ್ತು ವಹಿಸುವುದು ನೋಡಿದರೆ ಇದರಲ್ಲಿ ಬಿಜೆಪಿಗೆ ಲಾಭ ಇಲ್ಲದಿರಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

Leave a Reply