ವಿಶೇಷಚೇತನರು ತ್ರಿಚಕ್ರವಾಹನ ಪಡೆಯಲು ಯಾವುದೇ ಹಣ ನೀಡಬೇಡಿ

1 year ago

ದಾವಣಗೆರೆ: 2023-24ನೇ ಸಾಲಿನ ತ್ರಿಚಕ್ರ ವಾಹನದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ವಿಮೆ ಮುಂತಾದ ದಾಖಲಾತಿಗಳು ಫಲಾನುಭವಿಗಳ ಹೆಸರಿನಲ್ಲಿ ನೋಂದಾಯಿತವಾಗಿರುತ್ತದೆ. ಡಿ.3 ರಂದು ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ವಿಧಾನಸಭಾ ಕ್ಷೇತ್ರವಾರು ತಲಾ ಇಬ್ಬರು ಫಲಾನುಭವಿಗಳಂತೆ 14 ಫಲಾನುಭವಿಗಳಿಗೆ ಗಣ್ಯರ ಸಮ್ಮುಖದಲ್ಲಿ ಯಂತ್ರಚಾಲಿತ ತ್ರಿಚಕ್ರ ವಾಹನವನ್ನು ವಿತರಿಸಲಾಗಿದೆ. ಉಳಿದ ತ್ರಿಚಕ್ರವಾಹನವನ್ನು ಆಯಾ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದಿನಾಂಕ ಪಡೆದು ವಿತರಿಸಲಾಗುತ್ತದೆ.

ವಾಹನ ಪಡೆಯುವ ಫಲಾನುಭವಿಗಳು ಕಚೇರಿಯಲ್ಲಿ ಯಾರಿಗೂ ಹಣ ಸಂದಾಯ ಮಾಡದಂತೆ, ಒಂದು ವೇಳೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಹೆಸರಿನಲ್ಲಿ ಮಧ್ಯವರ್ತಿಗಳು ಹಣ ಕೇಳಿದ್ದಲ್ಲಿ ಈ ಕಚೇರಿಗೆ ದೂರು ಸಲ್ಲಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ ಪ್ರಕಾಶ್ ತಿಳಿಸಿದ್ದಾರೆ.

Leave a Reply