ರಾಜ್ಯ Indian National Congress – Karnataka ಸರ್ಕಾರವು ಯಾವುದೇ ಬೇಡಿಕೆ ಇಲ್ಲದಿದ್ದರೂ, ಅತ್ಯಂತ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯುತ್ತಿರುವ ಶಿಕ್ಷಣ ವ್ಯವಸ್ಥೆಯ ನಡುವೆ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸುವ ಮೂಲಕ ಧರ್ಮದ ಆಧಾರದಲ್ಲಿ ಮಕ್ಕಳಲ್ಲಿ ಬೇಧಭಾವ ಮೂಡುವಂತಹ ಆದೇಶವನ್ನು ಹೊರಡಿಸಿದೆ.
- ಮೋದಿಯವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ
- ಮಕ್ಕಳಲ್ಲಿ ಬೇಧಭಾವ, ಆತಂಕದ ವಾತಾವರಣ ಸೃಷ್ಟಿಸುವ ಕೆಲಸ: ಬಸವರಾಜ ಬೊಮ್ಮಾಯಿ
- ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ: ಜನಸಾಮಾನ್ಯರಿಗೆ ಮತ್ತೊಂದು ಹೊರೆ
- ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಜಯಂತಿ
- ಡಾ.ಎಚ್.ಆರ್. ಸ್ವಾಮಿ ಅವರ ಕುಡ್ರ್ ವಾತ ಕತ ಜನಾರ್ಪಣೆ ಸಡಗರ
1980ರ ಶಾಲಾ ಸಮವಸ್ತ್ರ ಕಾಯ್ದೆಯ ಅಡಿಯಲ್ಲಿ ನಾವು ಸ್ಪಷ್ಟೀಕರಣಾತ್ಮಕ ಆದೇಶ ಹೊರಡಿಸಿದ್ದೆವು. ಅದನ್ನು ಹೈಕೋರ್ಟ್ ಕೂಡ ಸಮರ್ಥಿಸಿತ್ತು. ಸುಪ್ರೀಂ ಕೋರ್ಟ್ನಲ್ಲಿಯೂ ವಿಭಜಿತ ತೀರ್ಪು ಬಂದಿತ್ತು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವಾಗಲೇ, ಮಕ್ಕಳಲ್ಲಿ ಮತ್ತೆ ಬೇಧಭಾವ ಮತ್ತು ಆತಂಕದ ವಾತಾವರಣ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಯಾವುದೇ ಸ್ಪಷ್ಟವಾದ ಶಿಕ್ಷಣ ನೀತಿ ಇಲ್ಲ. ವಿದ್ಯಾರ್ಜನೆ ಕುಂಠಿತವಾಗಿದೆ. ಶಿಕ್ಷಕರ ಕೊರತೆ ಗಂಭೀರವಾಗಿದೆ. ಇಂತಹ ವೈಫಲ್ಯಗಳನ್ನು ಮುಚ್ಚಿಹಾಕಲು ಈ ರೀತಿಯ ಆದೇಶಗಳನ್ನು ತರುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮಾಡಲು ಅನೇಕ ಅಭಿವೃದ್ಧಿ ಕೆಲಸಗಳಿವೆ. ಅವನ್ನು ಬದಿಗಿಟ್ಟು, ಈ ರೀತಿಯ ವಿವಾದಾತ್ಮಕ ಆದೇಶವನ್ನು ಏಕಾಏಕಿ ಜಾರಿಗೊಳಿಸಿರುವುದು ಯಾಕೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು. ಇದು ತುಷ್ಟೀಕರಣದ ರಾಜಕಾರಣ ಬಿಟ್ಟರೆ ಮತ್ತೇನೂ ಅಲ್ಲ ಎನ್ನುವುದು ಸ್ಪಷ್ಟವಾಗಿದೆ.
ಹಿಜಾಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಸೌದಿ ಅರೇಬಿಯಾ, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹಿಜಾಬ್ ತೊರೆದು ತಮ್ಮ ನಿತ್ಯ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಮಾತ್ರ ಹೆಣ್ಣುಮಕ್ಕಳನ್ನು ಹಿಂದುಳಿದ ಮನೋಭಾವಕ್ಕೆ ತಳ್ಳುವ ರೀತಿಯ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ. ಸರ್ಕಾರ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಆತಂಕ ಮತ್ತು ಬೇಧಭಾವಕ್ಕೆ ಸರ್ಕಾರವೇ ನೇರ ಹೊಣೆಗಾರಿಯಾಗುತ್ತದೆ. ಕಾನೂನುಬದ್ಧವಾಗಿ ರಾಜ್ಯ ಸರ್ಕಾರವೇ ಹೊಸ ವಿವಾದಕ್ಕೆ ಕಾರಣವಾಗಿದೆ. ಇದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇದು ಜವಾಬ್ದಾರಿಯುತ ಆಡಳಿತವಲ್ಲ, ಅತ್ಯಂತ ಬೇಜವಾಬ್ದಾರಿಯ ನಿರ್ಧಾರವಾಗಿದೆ.
– ಬಸವರಾಜ ಬೊಮ್ಮಾಯಿ, ಸಂಸದ



